Wednesday 6 January 2021

ಅವನ ಚಿತ್ತ ! - ಇಂದು ಮುಂಜಾನೆಯ ಮಳೆ

ಅವನ ಚಿತ್ತ  ! 


ರವಿ, ಶಶಿಯರ 

ಸೃಷ್ಟಿಸಿದಾತ  

ಉದಯಾಸ್ತಗಳ 

ನೇಮಿಸಿದಾತ 

ನಮಗೆ  ಕಂಗಳನಿತ್ತ

ನೋಡಿ ನಲಿದಾಡುವ 

ಮನವನಿತ್ತ.  


ಎಳೆ ಬಿಸಿಲಿನಲಿ  

ಹಿತಗೊಳುವ  

ತಂಗಾಳಿಯಲಿ 

ಸುಖಪಡುವ 

ಮೊದಲಹನಿ ಬಿದ್ದ 

ಮಣ್ಣಿನಿಂದೆದ್ದ 

ಮೆಲುವಾಸನೆಯ  

ಮೂಸಿನಲಿವ

ಇಂದ್ರಿಯಗಳನಿತ್ತ 

ಅವನ ಚಿತ್ತ ! 


ಸುಡುವ ಬಿಸಿಲನಿತ್ತ 

ಹಸಿವ ಬರಗಾಲವನಿತ್ತ 

ಸುರಿವ ಮಳೆಯಿತ್ತ  

ಸೆಳೆವ ಪ್ರವಾಹವನಿತ್ತ

ಕಷ್ಟ ಕಾರ್ಪಣ್ಯವಿತ್ತ  

ರೋಗ ರುಜಿನವನಿತ್ತ 

ನೆಮ್ಮದಿಯ ಕಿತ್ತ 

ಅವನ ಚಿತ್ತ !


ಬಂದ ಧರೆಯತ್ತ 

ಧನುವ ಧರೆಗಿಟ್ಟವನತ್ತ  

ಸಖನ ಶಿರ ನೇವರಿಸುತ್ತ 

ಉಪದೇಶವ ನಮಗಿತ್ತ 

ನೋಡುವಿಯೇಕೆ ಅತ್ತಿತ್ತ 

ಎಲ್ಲವೂ ನನ ಚಿತ್ತ 

ನಡೆ ನಾ ನಡೆಸಿದತ್ತ 

ಸುಖದುಃಖದಲಿರಿಸಿ

ಸಮಚಿತ್ತ.   



ಇಂದು ಮುಂಜಾನೆಯ ಮಳೆ 


ಆಕಾಶಕ್ಕೆಲ್ಲಾ ಮೋಡಾಮುಚ್ಚಿ 

ಚಂದ್ರನ್ ಮೋರೆ ಮರೇ ಮಾಚಿ 

ಕತ್ಲಾಗ್ ಕುಂತ್ಕೊಂಡ್ ಈ ನಮ್ ದೇವ್ರು 

ತಟ್ಟಾ ತಟ್ಟಾ ಮಳೆ ಬುಡ್ತೌನೆ

ಮುನಿಯ ಯೆಂಡ ಬುಡುವಂಗೇನೆ !


(ಶ್ರೀ ರಾಜರತ್ನಂ ಅವರ ಕ್ಷಮೆಕೋರಿ)


ರಘುನಂದನ

ಬಹುಮಹಡಿಯ ಮುಂಜಾನೆ

ನನ್ನ ಪುತ್ರ ವಾಸಿಸುವ ಬಹುಮಹಡಿ ಕಟ್ಟಡದ ಸುತ್ತ ಮುತ್ತ ಇಂದು ಮುಂಜಾನೆ ನಡೆದಾಡುವಾಗ ಕಂಡ ಚಿತ್ರಗಳು, ಅದರಿಂದ ಪ್ರೇರಿತವಾಗಿ ಹೊರಬಿದ್ದ ಪದಗಳು.  ಬೆಳಗಿನ ಮೊದಲ ಮೆಟ್ರೋ  ...