ಮುಂಜಾನೆಯೆದ್ದು ಹೊರಬಂದಾಗ
ದೇಶಕ್ಕೆ ಬೀಗ ಬಿದ್ದಿತ್ತು
ಸುತ್ತಲೂ ಕತ್ತಲಿತ್ತು
ಮನದಲ್ಲಿ ಅಂಜಿಕೆಯಿತ್ತು
ಆದರೆ
ತಂಗಾಳಿ ಬೀಸುತ್ತಿತ್ತು
ಕೋಗಿಲೆ ಕೂಗುತ್ತಿತ್ತು
ಗಿಡದಲ್ಲಿ ಹೂವು ಅರಳಿತ್ತು
ಕೆಲಸಮಯದಲ್ಲೇ
ಕಿರಣಮೂಡುವುದೆನ್ನಿಸಿ
ಕಳವಳ ಕಡಿಮೆಯಾಯಿತು
ಮರಳಿ ಮರಳಿ ಬರುವ ಯುಗಾದಿ
ತಮಗೆಲ್ಲಾ ಶುಭ ಕೊಂಡುಬರಲಿ