Saturday, 23 February 2019

ಹೂವಿನ ಚುಕ್ಕೆ, ಭಿತ್ತಿಯಾದ ಬಾನು , ಬೆಟ್ಟ ಹಿಮಾಲಯವಾಗದೋ





ಚೆನ್ನೈ ದಿಂದ ಬೆಂಗಳೂರಿಗೆ ಪಯಣಿಸುವಾಗ, ಜೋಲಾರಪೇಟೆ ನಿಲ್ದಾಣ ದಾಟಿದ ಮೇಲೆ ಕಾಣಸಿಗುವ ದೂರದ ಬೆಟ್ಟಗಳ  
ತುದಿಯಲ್ಲಿದ್ದ ಬಿಳಿಕಲ್ಲಿನ ಬಂಡೆಗಳು, ಶಿಖರಕ್ಕೆ ಮುಸುಕಿದ ಹಿಮದಂತೆ ಕಂಡವು. ಆ ದೃಶ್ಯ ಕಂಡಾಗ ಮನಸ್ಸಿಗೆ
ಹೊಳೆದ ಸಾಲುಗಳು

ಹೊಳೆವುದೆಲ್ಲ  ಬಂಗಾರವಲ್ಲ,
ಬೆಳ್ಳಗಿರುವುದೆಲ್ಲ ಹಾಲಲ್ಲ,
ದೂರ ಬೆಟ್ಟದ ಮೇಗಡೆ
ಬಿಳಿ ಮುಸುಕು ಕಂಡೊಡೆ
ಮುಸುಕು ಹಿಮವಾಗದು
ಬೆಟ್ಟ ಹಿಮಾಲಯವಾಗದೋ
ಮರುಳೇಶ್ವರಾ



ಹಚ್ಚ ಹಸಿರಿನ ನಡುವೆ
ಅಚ್ಚ ಬಿಳಿ ಹೂ ಚುಕ್ಕೆ,
ಕಾರಿರುಳ ಆಗಸದಿ   
ಚಿಕ್ಕೆಗಳ ಚುಕ್ಕೆ    


ಒಮ್ಮೊಮ್ಮೆ ಕಂಡಾಗ   
ಒಂದೊಂದು ಹೊಸಪರಿ
ಬಣ್ಣಿಸಬಯಸಿ ಸೋತೆ

ನಾ ಬಾರಿ ಬಾರಿ

ಭಿತ್ತಿಯಾದ ಬಾನು


ಬಾನಿನ ಭಿತ್ತಿಯಮೇಲೆ
ಸಂಜೆಯ ಬಣ್ಣ ಹರಡಿ   
ರೆಂಬೆ ಕೊಂಬೆ ಕುಂಚದಿಂದ
ಪ್ರಕೃತಿ ಬಿಡಿಸಿದ
ಬೆರಗಿನ ಚಿತ್ರ !




No comments:

Post a Comment

  ‘ಪಕ್ಷಪಾತಿ ಸೂರ್ಯ’  ಅಲ್ಲಿಯೂ ಇದೇ ಸೂರ್ಯನೇ.  ಇಲ್ಲಿ ಮೂಡುವಂತೆಯೇ ಅಲ್ಲಿಯೂ  ಮೂಡುತ್ತಾನೆ, ಮುಂಜಾನೆ, ನಮ್ಮೂರಿನಲ್ಲಿ   ಇಲ್ಲಿ  ಸುಂದರವಾದ ಸಾಲು ಮನೆಗಳ ನಡುವೆ    ...