Friday, 19 April 2019

ಸಾರ್ವತ್ರಿಕ ಚುನಾವಣೆ And ಚಂದಿರನ ಹಿಂಜರಿಕೆ

ಬೇಕೆ ನಿಮಗೆ ಏಳಿಗೆ ?
ಹಾಕಿ ವೋಟು ಮೋದಿಗೆ
ನಿಮ್ಮ ಮುಂದಿನ ಹಾದಿ ?
ಆಗಲಿ ರಾಹುಲ ಗಾಂಧಿ
ಬಂಗಾಳದ ಬ್ಯಾನರ್ಜಿ ?
ಆ ಹೆಸರೇ ನಮಗೆ ಅಲರ್ಜಿ!
ಮತ್ತೆ ಮಾತೆ ಜಯಲಲಿತಾ
ಸತ್ತರೂ ಕಾಯ್ವಳು ನಿಮ್ಮ ಹಿತ.
ಗತ ಪಿತಾಮಹ ಕರುಣಾನಿಧಿ
ಅವನ ಬಿಟ್ಟು ಮತ್ತೇನು ವಿಧಿ?
ಇನ್ನು ಆಂಧ್ರದ ರೆಡ್ಡಿಗಳು
ಕಾಂಗ್ರೆಸ್ಸಿನ ಕಬಾಬಿನ ಹಡ್ಡಿಗಳು
ತೆಲಂಗಾಣದ ರಾವೋ
ಅದೇನು ಅವನ ಕಾವೋ!
ಬಿಹಾರದಲ್ಲಿ ನಿತೀಶ ಕುಮಾರ
ನೋಡಬೇಕು ಅವನೆಂಥ ವೀರ
ನಮ್ಮ ಲಾಲು ಪ್ರಸಾದ
ಆವ ಜೈಲಿನಲ್ಲಿದ್ದರೂ ಯೋಧ!
ಮಾಯಾ - ಅಖಿಲೇಶ ಒಂದೇ
ನಿಮ್ಮ ವೋಟು ಗಿಟ್ಟಿಸಲೆಂದೇ!


ಈ ಯಾರದೂ ಬೇಡ ಎನಗೆ ಕಾಟ
ಅದಕ್ಕೆಂದೇ ಇದೆ ಇಗೋ ನೋಟಾ !

ಇದು ನಮ್ಮ ಸಾರ್ವತ್ರಿಕ ಚುನಾವಣೆ
ಅದ ಮೀರಿದ ಮನರಂಜನೆ ನಾ ಕಾಣೆ!


ಚಂದಿರನ ಹಿಂಜರಿಕೆ




ಮೇಘಮಾನಿನಿಯ  
ಸೆರಗ ಮರೆಯಿಂದ
ಹೊರಸರಿಯೆ     
ಚಂದಿರ
ಹಿಂಜರಿಯುತಿಹನೇಕೆ ?

ತಾರೆಯ
ಕಣ್ಗಾವಲ  
ವಾರೆನೋಟ  
ಸರಿದು ಕೊಂಚ
ದೂರವಾಗಬೇಕೇ ?






No comments:

Post a Comment

ಬಹುಮಹಡಿಯ ಮುಂಜಾನೆ

ನನ್ನ ಪುತ್ರ ವಾಸಿಸುವ ಬಹುಮಹಡಿ ಕಟ್ಟಡದ ಸುತ್ತ ಮುತ್ತ ಇಂದು ಮುಂಜಾನೆ ನಡೆದಾಡುವಾಗ ಕಂಡ ಚಿತ್ರಗಳು, ಅದರಿಂದ ಪ್ರೇರಿತವಾಗಿ ಹೊರಬಿದ್ದ ಪದಗಳು.  ಬೆಳಗಿನ ಮೊದಲ ಮೆಟ್ರೋ  ...