ತೆಂಗಿನ ಹಿಂಬದಿಯ
ರಂಗಿನೋಕುಳಿಯಲ್ಲಿ
ಕಂಗೊಳಿಸಿದ ಸೂರ್ಯ
ಅಂತರಂಗದಿಂದೆಳೆದ
ಕವಿಪುಂಗವರ ಸಾಲುಗಳ !
“ಪಟ್ಟಾಗಿ ಕುಡುದ್ಬುಟ್ಟಿ
ತೂರಾಡ್ತ ತೂಗ್ತಾನೆ
ಕಣ್ಗಳ್ನ ಕೆಂಪಿಗ್ಮಾಡ್
ತೇಲಿಸ್ತಾನೆ
ಅದಕಂಡು ಬೆಪ್ತಕಡಿ
ನರಮನ್ಸ ಸೂರ್ಯನ್ನ
ಅದಕಂತೆ ಇದಕಂತೆ
ವೋಲಿಸ್ತಾನೆ !”
(ಶ್ರೀ ಜಿ ಪಿ ರಾಜರತ್ನಂ ಅವರ ‘ಸಮಾದಾನ’ ಪದ್ಯದಿಂದ )
ಕೊಕ್ಕಗಲಿಸಿದಾಕ್ಷಣ
ಗುಕ್ಕುಬಾಯಿಗೆ ಬಿತ್ತೇ!
No comments:
Post a Comment